Saturday, October 5, 2013

ಬರೆಯಲೇನುಂಟು?

ಏನಾದರು ಒಂದು 
ವಿಷಯದ ಕುರಿತು ಕವನ
ಬರಿ ಎಂದರೆ ಏನು
ಬರೆಯಲಿ ಗೆಳೆಯ?

ಕಾಡು ಮೇಡುಗಳಿಂದ ತುಂಬಿ
ಹಲವಾರು ಪ್ರಾಣಿ ಪಕ್ಷಿಗಳಿಗೆ 
ಆಶ್ರಯವಾಗಿದ್ದ ಈ ನಮ್ಮ
ಸುಂದರ ನಿಸರ್ಗ
ಕಣ್ಮರೆಯಾಗುತ್ತಿರುವುದರ ಕುರಿತು ಬರೆಯಲೇ?

ಕಾಡ ಕಡಿದು, ನಾಡ ಮಾಡುವ
ಅಂತ್ಯ ಬಯಕೆಯಿಂದ
ಮಲೆನಾಡು ಕಣ್ಮರೆಯಾಗಿ
ಕೇವಲ ನಾಡಾನ್ನಾಗಿಸುತಿಹ
ಈ ನಮ್ಮ ಜನತೆಯ 
ಕುರಿತು ಬರೆಯಲೇ?

ನಿಸರ್ಗ ನಾಶದ ಪರಿಣಾಮವಾಗಿ
ಮಳೆ ಸರಿಯಾಗಿ ಬೀಳದೇ
ಮಳೆ ಎಂದು ಬರತ್ತೋ
ಎಂದು ಹೋಗತ್ತೋ ಎಂದು
ಆಲೋಚನೆಯಲ್ಲೇ ಕಾಲ ಕಳೆಯುತಿಹ
ಬಡ ರೈತರ ಬಗ್ಗೆ ಬರೆಯಲೇ?

ಮಳೆ ಸರಿಯಾಗಿ ಬಾರದೇ
ನದಿ ಬತ್ತಿ, ವಿದ್ಯುತ್ತಿಗೆ
ನೀರಿಗೆ ತೊಂದರೆಯುಂಟಾಗಿ
ಪೇಚಾಡುತ್ತಿರುವ ನಮ್ಮಂತ
ಸಾಮಾನ್ಯ ಜನತೆಯ ಬಗ್ಗೆ ಬರೆಯಲೇ?

ಸ್ವರ್ಗವಾಗಿರಬೇಕಾದ ನಿಸರ್ಗ
ವಾಯುಮಾಲಿನ್ಯ, ಶಬ್ಧಮಾಲಿನ್ಯ
ಜಲಮಾಲಿನ್ಯಗಳಿಂದ ಕಂಗೆಟ್ಟು
ನರಕವಾಗುತಿರುವುದರ 
ಕುರಿತು ಬರೆಯಲೇ ಗೆಳೆಯ!

--ಮಂಜು ಹಿಚ್ಕಡ್ 

No comments:

Post a Comment