Thursday, August 8, 2013

ಬದುಕು

ಬದುಕು ಭವಣೆ ಬದಲಾಯಿಸಿತೇ
ವಿಧಿಯು ಬರೆದ ಬರಹ
ನೋವು-ನಲಿವು, ಹುಟ್ಟು-ಸಾವು
ಹೀಗೆ ಹತ್ತು-ಹಲವು ತರಹ!

ಸುಖ-ದುಖಗಳೆರಡು ಒಂದೇ
ಎಂದು ಬಾಳಿದರೆ ಬದುಕು
ಅರಿತು ಬಾಳಿದರೆ ತಾನೇ
ಮೂಡುವುದು ಮನದಿ ಬೆಳಕು!

ತನುವು ಬೇಕು, ಮನವು ಬೇಕು
ಈ ಜೀವನ ಸಾಗಲು
ರಾತ್ರಿ-ಹಗಲುಗಳೆರಡು ಬೇಕು
ಒಂದು ದಿನವು ಕಳೆಯಲು!

ಬಣ್ಣ ಬಣ್ಣದ ಲೋಕ ನೋಡಲು ಬೇಕು
ಕಪ್ಪು-ಬಿಳುಪಿನ ನಯನ
ಉಬ್ಬು-ತಗ್ಗುಗಳಿರದೆ ಸಾಗಿತೇ
ನಮ್ಮ ಬದುಕಿನ ಪಯಣ!
-- ಮಂಜು ಹಿಚ್ಕಡ್

No comments:

Post a Comment