Saturday, September 14, 2013

ಯೋಚಿಸು ಮೊದಲು ನಿನ್ನಯ ಬಗ್ಗೆ...

ಅವರಿವರ ಮನೆಯ
ಚಿಂತೆ ನಿನಗೇಕೆ?
ಕೇಳಿ ತಿಳಿದರೆ ಹೊಡೆಯುವಳು,
ಪಕ್ಕದ ಮನೆಯಾಕೆ.

ಮೊದಲು ನಿನೇನು, ನಿನ್ಯಾರು?
ಎನ್ನುವುದ ತಿಳಿ
ಮೊದಲು ನೀ ಬೆಳೆಸಿಕೋ
ನಿನ್ನವರ ಬಗ್ಗೆ ಕಳಕಳಿ.

ಅವರಿವರನು ಹಳಿದು ತೋರಿಸಬೇಡ
ನಿನ್ನೆಯ ಪ್ರತಾಪ.
ನಿನ್ನ ನೀ ತಿಳಿದರೆ,
ನಿನ್ನ ಬಾಳು ನಂದಾದೀಪ.

ಎಲ್ಲರ ಮನೆಯ
ದೋಸೆಯು ತೂತು
ಎಂದು ಅರಿತರೆ ತಾನೆ
ನಮಗೆ ಒಳಿತು.

ಯೋಚಿಸಿ ಹಾಳು ಮಾಡದಿರು ಸಮಯ,
ಪಕ್ಕದ ಮನೆಯವರ ಬಗ್ಗೆ
ಹುಚ್ಚಿರಲಿ, ಕೆಚ್ಚಿರಲಿ, ನೆಚ್ಛಿರಲಿ,
ನಿನ್ನ ಗುರಿ ತಲುಪುವ ಬಗ್ಗೆ.

--ಮಂಜು ಹಿಚ್ಕಡ್ 

No comments:

Post a Comment