Thursday, December 25, 2014

ಚಿಂತೆ ಮತ್ತು ಚಿಂತನೆ

ಚಿಂತೆ ಯಾರಿಗಿರುವುದಿಲ್ಲ ಹೇಳಿ
ಚಿಂತೆ ಬಿಟ್ಟಿದ್ದಾರೆನ್ನುವಾದರು ಇದೆಯೇ.

ಸಾಮ್ರಾಜ್ಯವನ್ನು ಕಟ್ಟಿ ಮೆರೆದು
ಪ್ರಜೆಗಳಿಗೆ ಸುಖ ನೆಮ್ಮದಿಯನ್ನು
ದಯಪಾಲಿಸಿದ ಹೊಯ್ಸಳೇಶ್ವರ
ವಿಷ್ಣುವರ್ಧನನ್ನು ಬಿಟ್ಟಿದೆಯೇ ಚಿಂತೆ.

ತನ್ನ ಸಾಮ್ರಾಜ್ಯವನ್ನು
ಸುವರ್ಣಯುಗಕ್ಕೆ ಕೊಂಡೊಯ್ದು
ಪ್ರಜೆಗಳಿಂದ ಹಾಡಿ ಹೊಗಸಿಳಿಸಿಕೊಂಡ
ಕೃಷ್ಣದೇವರಾಯನನ್ನು ಬಿಟ್ಟಿದೆಯೇ ಚಿಂತೆ.

ಮರಾಠರನ್ನೆಲ್ಲ ಒಗ್ಗೂಡಿಸಿ
ಮರಾಠ ಸಾಮ್ರಾಜ್ಯವನ್ನೇ
ಸ್ಥಾಪಿಸಿದ ಶಿವಾಜಿಯನ್ನು
ಬಿಟ್ಟಿದೆಯೇ ಈ ಚಿಂತೆ.

ಅಷ್ಟೇ ಏಕೆ?
ರಾಮ, ಕೃಷ್ಣ, ಬುದ್ದ, ಗಾಂದಿ
ಇವರನ್ನು ಕೂಡ
ಕಾಡಿಲ್ಲವೇ ಆ ಚಿಂತೆ.

ಚಿಂತೆಯಿಲ್ಲದರಿದ್ದಾರೆಯೇ
ಬರೀಯ ಚಿಂತೆಯಲ್ಲಿಯೇ
ಬದುಕುವವರಿಗೆ ಮಾತ್ರ
ಈ ಬದುಕು ಚಿತೆಯೇರುವವರೆಗೆ ಮಾತ್ರ.

ಆದರೆ ಅದೇ ಚಿಂತೆಗಳನ್ನು
ಚಿಂತನೆಯನ್ನಾಗಿಸಿ, ಆ
ಚಿಂತನೆಗಳನ್ನೇ ಆದರ್ಶಗಳನ್ನಾಗಿಸಿ
ಬದುಕಿ ಬಾಳಿದವರು,
ಚಿತೆಯೇರಿ ಮರೆಯಾದರೂ
ಇತರರ ಜೀವನದಲ್ಲಿ
ಸದಾ ಹಸಿರಾಗಿ,
ಆದರ್ಶಪ್ರಾಯರಾಗಿ
ಇರುವುದಿಲ್ಲವೇ?

ಚಿಂತೆ ಚಿತೆಯೇರುವವರೆಗೆ
ಆದರೆ ಅದೇ ಚಿಂತನೆ
ವ್ಯಕ್ತಿ ಚಿತೆಯೇರಿ ಮರೆಯಾದರೂ
ಅದು ಅಜರಾಮರ.

--ಮಂಜು ಹಿಚ್ಕಡ್

No comments:

Post a Comment