ಎರಡಡಿ ಮೂರಡಿ ಜಾಗದಲ್ಲಾಗುವ
ಚರ್ಚೆಯ ಕಾವು,
ಎರುತ್ತಲೇ ಹೋಗುವುದು ನಿಶೆಯೊಂದಿಗೆ
ಮೆದುಳ ಹೊಕ್ಕ ಮಧುವಿನ ನಶೆಯೊಂದಿಗೆ.
ರಸ ರಸ ಒಳಸೇರಿದಾಗ
ಪಾದರಸದಂತ ಹುರುಪು
ಕಣ್ಣು ಕೆಂಪಾದರೇನಂತೆ?
ನಾಲಿಗೆ ತೊದಲಿದರೇನಂತೆ?
ಕುಂದಲಾರದು ಮಾತಿನ ಹೊಳಪು.
ಕುಡಿದು ಕುಡಿದು
ತಲೆ ಸುತ್ತಿ ಬಂದರೂ, ವಾಕರಿಕೆ
ಮತ್ತೆ ಮತ್ತೆ ಬೇಕೆನ್ನುವ ಬಯಕೆ
ಒಮ್ಮೆ ರುಚಿ ನೋಡಿದ
ಈ ಹಾಳು ಮನಕೆ.
ಅಲ್ಲಿ ಸೇರಿದ ಎಲ್ಲರದು ಒಂದೇ ತತ್ವ
ಪ್ರತಿ, ಪ್ರತಿ ಹನಿಗೂ ಅದರದೇ ಮಹತ್ವ.
ಚರ್ಚೆಯುಂಟು ಇಲ್ಲಿ, ಇರ್ಷೆಯಿಲ್ಲ
ಕೂಡಿ ಕುಡಿಯಲು, ಸಂಬಂಧ ಬೇಕಿಲ್ಲ.
ಇದು ಕಾಲಾತೀತ, ಸಮಯಾತೀತ
ಹಣದ ಹಂಗಿಲ್ಲ, ವಯಸ್ಸಿನ ಹಮ್ಮಿಲ್ಲ
ಹೊರಬರುವವು ಮಾತುಗಳು
ತಾವು ತಾವಾಗೇ.
ಒಮ್ಮೆ ಗೂಡಾರ್ಥ, ಒಮ್ಮೆ ಭಾವಾರ್ಥ
ಒಮ್ಮೆ ಆವೇಗ, ಒಮ್ಮೆ ಭಾವೋಧ್ವೇಗ
ಹೊರ ಬರುತಲೇ ಇರುವವು
ಮನದ ಮಾತುಗಳು, ಸಾಲು ಸಾಲಾಗಿ
ಹಸಿರು ದೀಪ ಪ್ರಜ್ವಲಸಿದೊಡೆ
ಹೊರ ಬರುವ ವಾಹನಗಳಂತೆ
--ಮಂಜು ಹಿಚ್ಕಡ್
ಚರ್ಚೆಯ ಕಾವು,
ಎರುತ್ತಲೇ ಹೋಗುವುದು ನಿಶೆಯೊಂದಿಗೆ
ಮೆದುಳ ಹೊಕ್ಕ ಮಧುವಿನ ನಶೆಯೊಂದಿಗೆ.
ರಸ ರಸ ಒಳಸೇರಿದಾಗ
ಪಾದರಸದಂತ ಹುರುಪು
ಕಣ್ಣು ಕೆಂಪಾದರೇನಂತೆ?
ನಾಲಿಗೆ ತೊದಲಿದರೇನಂತೆ?
ಕುಂದಲಾರದು ಮಾತಿನ ಹೊಳಪು.
ಕುಡಿದು ಕುಡಿದು
ತಲೆ ಸುತ್ತಿ ಬಂದರೂ, ವಾಕರಿಕೆ
ಮತ್ತೆ ಮತ್ತೆ ಬೇಕೆನ್ನುವ ಬಯಕೆ
ಒಮ್ಮೆ ರುಚಿ ನೋಡಿದ
ಈ ಹಾಳು ಮನಕೆ.
ಅಲ್ಲಿ ಸೇರಿದ ಎಲ್ಲರದು ಒಂದೇ ತತ್ವ
ಪ್ರತಿ, ಪ್ರತಿ ಹನಿಗೂ ಅದರದೇ ಮಹತ್ವ.
ಚರ್ಚೆಯುಂಟು ಇಲ್ಲಿ, ಇರ್ಷೆಯಿಲ್ಲ
ಕೂಡಿ ಕುಡಿಯಲು, ಸಂಬಂಧ ಬೇಕಿಲ್ಲ.
ಇದು ಕಾಲಾತೀತ, ಸಮಯಾತೀತ
ಹಣದ ಹಂಗಿಲ್ಲ, ವಯಸ್ಸಿನ ಹಮ್ಮಿಲ್ಲ
ಹೊರಬರುವವು ಮಾತುಗಳು
ತಾವು ತಾವಾಗೇ.
ಒಮ್ಮೆ ಗೂಡಾರ್ಥ, ಒಮ್ಮೆ ಭಾವಾರ್ಥ
ಒಮ್ಮೆ ಆವೇಗ, ಒಮ್ಮೆ ಭಾವೋಧ್ವೇಗ
ಹೊರ ಬರುತಲೇ ಇರುವವು
ಮನದ ಮಾತುಗಳು, ಸಾಲು ಸಾಲಾಗಿ
ಹಸಿರು ದೀಪ ಪ್ರಜ್ವಲಸಿದೊಡೆ
ಹೊರ ಬರುವ ವಾಹನಗಳಂತೆ
--ಮಂಜು ಹಿಚ್ಕಡ್
No comments:
Post a Comment