ಜಯನಗರದಲ್ಲುಂಟು, ಜೇಪಿ ನಗರದಲ್ಲಿಲ್ಲ
ಕೊಡೆಯಿಲ್ಲದಿರೆ ಉಂಟು, ಕೊಡೆಯಿದ್ದರೆ ಇಲ್ಲ
ಮೋಡಗಳಿಲ್ಲ, ಇಂದು ಮಳೆ ಬಾರದು ಅಂದರೂ
ಇನ್ನೊಂದು ಕ್ಷಣದಲ್ಲೇ ನಮ್ಮ ಮುಂದೆ ಹಾಜರು.
ಒಮ್ಮೊಮ್ಮೆ ಗುಡುಗು-ಮಿಂಚುಗಳ ಓಕುಳಿಯಾಟ
ಆದರೂ ಸುರುವಾಗದು, ಈ ಮಳೆಯ ಆಟ
ಬಾರದು ಎಂದು ಈ ಮಳೆಯ ನಂಬಿ ಹೋದರೆ
ಮಳೆ ಬಂದು, ಸಿಗಲಾರದು ನಿಂತು ಕೊಳ್ಳಲು ಆಸರೆ.
ಒಮ್ಮೆ ಧೋ ಎಂದು ಹೊಯ್ದು
ಉಬ್ಬು ತಗ್ಗುಗಳನ್ನೆಲ್ಲ ತೊಯ್ದು
ಮತ್ತಿನ್ನು ಬರಬಹುದೇನೋ ಎಂದು
ಸುಸ್ತಾಗುವೆವು, ಕಾಯ್ದು-ಕಾಯ್ದು.
ಬಾರದು ಎಂದರು ಬಂದು, ವಾಹನದಟ್ಟಣೆಯ ಹೆಚ್ಚಿಸಿ
ಮನೆಯ ತಲುಪುವವರ ವೇಳೆಯನು ವ್ಯಯಿಸಿ
ನಿಲ್ಲುವುದೆಂದು ಕಾದವರನು ಕಾಯಿಸಿ ಸತಾಯಿಸಿ
ರಸ್ತೆಯಲ್ಲೆಲ್ಲ ನೀರ್ ಕಾಲುವೆಯನು ಹರಿಸಿ.
ರಸ್ತೆಯಲ್ಲಿದ್ದ ಮಣ್ಣು ದೂಳುಗಳೆಲ್ಲದರ ಸಂಹಾರ
ಮಳೆ ನೀರು, ಚರಂಡಿ ನೀರುಗಳ ಸಮ್ಮಿಶ್ರ ಸರ್ಕಾರ
ಹೀಗುಂಟು ನಮ್ಮ ಬೆಂದಕಾಳೂರ ಮಳೆ
ಮಳೆ ಬಂದರೆ ಅಲ್ಲವೇ, ಈ ಇಳೆಗೊಂದು ಕಳೆ.
--ಮಂಜು ಹಿಚ್ಕಡ್
ಕೊಡೆಯಿಲ್ಲದಿರೆ ಉಂಟು, ಕೊಡೆಯಿದ್ದರೆ ಇಲ್ಲ
ಮೋಡಗಳಿಲ್ಲ, ಇಂದು ಮಳೆ ಬಾರದು ಅಂದರೂ
ಇನ್ನೊಂದು ಕ್ಷಣದಲ್ಲೇ ನಮ್ಮ ಮುಂದೆ ಹಾಜರು.
ಒಮ್ಮೊಮ್ಮೆ ಗುಡುಗು-ಮಿಂಚುಗಳ ಓಕುಳಿಯಾಟ
ಆದರೂ ಸುರುವಾಗದು, ಈ ಮಳೆಯ ಆಟ
ಬಾರದು ಎಂದು ಈ ಮಳೆಯ ನಂಬಿ ಹೋದರೆ
ಮಳೆ ಬಂದು, ಸಿಗಲಾರದು ನಿಂತು ಕೊಳ್ಳಲು ಆಸರೆ.
ಒಮ್ಮೆ ಧೋ ಎಂದು ಹೊಯ್ದು
ಉಬ್ಬು ತಗ್ಗುಗಳನ್ನೆಲ್ಲ ತೊಯ್ದು
ಮತ್ತಿನ್ನು ಬರಬಹುದೇನೋ ಎಂದು
ಸುಸ್ತಾಗುವೆವು, ಕಾಯ್ದು-ಕಾಯ್ದು.
ಬಾರದು ಎಂದರು ಬಂದು, ವಾಹನದಟ್ಟಣೆಯ ಹೆಚ್ಚಿಸಿ
ಮನೆಯ ತಲುಪುವವರ ವೇಳೆಯನು ವ್ಯಯಿಸಿ
ನಿಲ್ಲುವುದೆಂದು ಕಾದವರನು ಕಾಯಿಸಿ ಸತಾಯಿಸಿ
ರಸ್ತೆಯಲ್ಲೆಲ್ಲ ನೀರ್ ಕಾಲುವೆಯನು ಹರಿಸಿ.
ರಸ್ತೆಯಲ್ಲಿದ್ದ ಮಣ್ಣು ದೂಳುಗಳೆಲ್ಲದರ ಸಂಹಾರ
ಮಳೆ ನೀರು, ಚರಂಡಿ ನೀರುಗಳ ಸಮ್ಮಿಶ್ರ ಸರ್ಕಾರ
ಹೀಗುಂಟು ನಮ್ಮ ಬೆಂದಕಾಳೂರ ಮಳೆ
ಮಳೆ ಬಂದರೆ ಅಲ್ಲವೇ, ಈ ಇಳೆಗೊಂದು ಕಳೆ.
--ಮಂಜು ಹಿಚ್ಕಡ್
No comments:
Post a Comment