Wednesday, February 8, 2017

ಧನ್ಯೋಸ್ಮಿ

ನನಗೆ ದಿನಾ ಬರೆಯೋ ಚಾಳಿ ಎಂದಿಗೂ ಇಲ್ಲ, ಎಲ್ಲೋ ಅಪರೂಪಕ್ಕೆ ಒಮ್ಮೆ ಏನೋ ನೆನಪಾಗಿ ಬರೆಯ ಬೇಕೆನಿಸಿದಾಗ ಮಾತ್ರ ನನ್ನ ಬರವಣಿಗೆ. ಮನಸ್ಸಿಗೆ ತೋಚಿದ್ದನ್ನೇ ಗೀಚುತ್ತೇನೆ, ಅದು ಸರಿ ತಪ್ಪು ಎನ್ನುವ ನಿರ್ಧಾರ ನನಗಿಲ್ಲ, ಅದೂ ಬೇಕು ಇಲ್ಲ. ಹಾಗೆ ಮನಸ್ಸಿನ ಮೂಲೆಯಲ್ಲಿದ್ದುದ್ದನ್ನು ಗೀಚಲು ಪ್ರಾರಂಭಿಸಿ ಅದೆಷ್ಟೋ ವರ್ಷಗಳಾಗಿದ್ದವು. ಹಾಗೆ ಗೀಚಿದ್ದು ಒಮ್ಮೊಮ್ಮೆ ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಇದೆ. ಬರವಣಿಗೆ ಕೇವಲ ನನ್ನ ಹವ್ಯಾಸಕ್ಕೆ ಮಾತ್ರ ಸೀಮೀತವಾಗಿದ್ದುದರಿಂದಲೂ ಅಥವಾ ಅದನ್ನು ಕೂಡಿಡುವ ಆಸೆ ಅಂದು ನನಗಿಲ್ಲದ್ದರಿಂದಲೋ ಏನೋ, ಹಾಗೆ ಗೀಚಿದ್ದರಲ್ಲಿ ಅದೆಷ್ಟೋ ಬರಹಗಳು ಎಲ್ಲೋ ಬಿದ್ದು ಗೆದ್ದಲು ಹಿಡಿದಿದ್ದು ಉಂಟು.

ಒಮ್ಮೆ ಹೀಗೆ ಅಂತರ್ಜಾಲದಲ್ಲಿ ಅದೇನೋ ಹುಡುಕುತ್ತಿರುವಾಗ ಯಾರದೋ ಬ್ಲಾಗಿನ ಕಿಡಕಿ ತೆರೆದು ಕೊಂಡಿತು. ಹಾಗೆ ಅದರೊಳಗೆ ಇಣುಕಿ ನೋಡುತ್ತಾ ಹೋದ ಹಾಗೆ, ಅದರೊಂದಿಗೆ ಇನ್ನೊಂದಿಷ್ಟು ಬ್ಲಾಗಗಳ್ ಅನಾವರಣವಾಯಿತು. ಮುಂದೆ ಅವೇ ನನಗೆ ನನ್ನದೇ ಆದ ಬ್ಲಾಗ್ ಅನ್ನು ತೆರೆಯಲು ಪ್ರೇರೆಪಣೆಯಾಯಿತು. ಬರೆದು ಎಲ್ಲೋ ಇಟ್ಟ ಹಳೆಯ ತುಣುಕುಗಳ ಜೊತೆಗೆ ಹೊಸ ಬರಹಗಳು ಸೇರಿ ಈ ಬ್ಲಾಗ್ " ಹೀಗೆ ಸುಮ್ಮನೆ " ಹುಟ್ಟಿ ಬೆಳೆಯತೊಡಗಿತು.

ಇಂದಿಗೆ ಸರಿಯಾಗಿ ಮೂರುವರೆ ವರ್ಷಗಳ ಹಿಂದೆ ಹುಟ್ಟಿಕೊಂಡ ಬ್ಲಾಗ್ ಇಂದು ಅರವತ್ತು ಸಾವಿರಕ್ಕೂ ಹೆಚ್ಚಿನ ಪುಟವೀಕ್ಷಣೆಯನ್ನು ಮೀರಿ ಮುಂದೆ ಸಾಗುತ್ತಿದೆ. ಇದಕ್ಕೆ ಮೂಲ ಕಾರಣ ನಿಮ್ಮೆಲ್ಲರ ಸಲಹೆ, ಪ್ರೋತ್ಸಾಹ ಹಾಗೂ ಹಾರೈಕೆ. ಅದು ಅಂದಿನಂತೆ, ಇಂದಿಗೂ, ಮುಂದಿಗೂ ಇರುತ್ತದೆ ಎನ್ನುವ ಬರವಸೆ ಸದಾ ನನಗಿದೆ. ನನ್ನ ಈ ಬರವಣಿಗೆಯ ಪಥದಲ್ಲಿ ಬಂದು ನಿಂತು ಓದಿ ಹಾರೈಸಿದ ತಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕವಾದ ಅನಂತಾನಂತ ಧನ್ಯವಾದಗಳು.

ಇಂತಿ ನಿಮ್ಮವ,

ಮಂಜು ಹಿಚ್ಕಡ್

No comments:

Post a Comment