Tuesday, December 27, 2016

ಆಧುನಿಕ ಶ್ರವಣಕುಮಾರರು

ಬಹುಶಃ ಭಾರತದಲ್ಲಿ ಶ್ರವಣಕುಮಾರನ ಹೆಸರು ಕೇಳದ ಒಬ್ಬನೇ ಒಬ್ಬ ವ್ಯಕ್ತಿ ಇರಲಿಕ್ಕಿಲ್ಲ. ಶ್ರವಣಕುಮಾರನ ಹೆಸರು ಬರುವುದು ರಾಮಾಯಣದಲ್ಲಿ. ಪಿತ್ರವಾತ್ಸಲ್ಯಕ್ಕೆ ಹೆಸರಾದ ಪುರಾಣ ಪುರುಷ. ಕುರುಡರಾದ ವ್ರದ್ದ ತಂದೆ ತಾಯಿಯರು ತಿರ್ಥಯಾತ್ರೆಗೆ ಹೊರಡಬೇಕೆಂದು ಬಯಸಿದಾಗ ಅವರನ್ನು ಎರಡು ಬುಟ್ಟಿಗಳಲ್ಲಿ ಕುಡಿಸಿ. ಆ ಎರಡು ಬುಟ್ಟಿಗಳನ್ನು ಒಂದು ಉದ್ದವಾದ ಮರದ ಕಂಬಿಗೆ ಆ ಕಡೆ ಈ ಕಡೆ ಕಟ್ಟಿ. ಆ ಕಂಬಿಯನ್ನು ಹೆಗೆಲ ಮೇಲೆ ಹೊತ್ತು ತಿರ್ಥಯಾತ್ರೆಗೆ ಕರೆದುಕೊಂಡು ಹೋದ ಮಹಾನ ಪುರುಷ. ಹೀಗೆ ಮುಂದೆ ಕಾಡಿನಲ್ಲಿ ಹೋಗುತ್ತಿದ್ದಾಗ ತಂದೆ-ತಾಯಿಯರಿಗೆ ಬಾಯಾರಿಕೆಯಾಗುತ್ತದೆ ಅಂದು ಹೇಳಿದಾಗ, ನೀರು ತರಲು ಅಲ್ಲೆ ಸಮೀಪವಿದ್ದ ಕೆರೆಗೆ ಹೋಗುತ್ತಾನೆ. ಆಗ ಅದೇ ಸಂಧರ್ಭದಲ್ಲಿ ಅಯೋದ್ಯೆಯ ಮಹಾರಾಜ ದಶರಥ ಬೇಟೆಗೆ ಎಂದು ಕಾದು ಕುಳಿತಿರುತ್ತಾನೆ. ಶ್ರವಣ ಕುಮಾರ ಕೆರೆಯ ಬಳಿ ನೀರು ತೆಗೆಯುತ್ತಿದ್ದಾಗ ದಶರಥ ಯಾವುದೋ ಪ್ರಾಣಿ ನೀರು ಕುಡಿಯುತ್ತಿದೆ ಎಂದು ತಿಳಿದು ಬಾಣ ಬಿಡುತ್ತಾನೆ. ಆ ಬಾಣ ಶ್ರವಣ ಕುಮಾರನಿಗೆ ತಗುಲಿ ಅಯ್ಯೋ ಎಂದು ಒದ್ದಾಡುತ್ತಿರುತ್ತಾನೆ. ಆ ಧ್ವನಿ ಕೇಳಿ ದಶರಥ ಅಲ್ಲಿಗೆ ಬರುತ್ತಾನೆ. ಅಲ್ಲಿಗೆ ಬಂದಾಗ ಆತನಿಗೆ ತಿಳಿಯುತ್ತದೆ ತಾನು ಬಾಣ ಬಿಟ್ಟಿದು ಪ್ರಾಣಿಗೆ ಅಲ್ಲ, ಮನುಷ್ಯನಿಗೆ ಎಂದು. ತನ್ನ ತಪ್ಪಿನ ಅರಿವಾಗಿ ಬೇಸರಗೊಂಡು ಶ್ರವಣ ಕುಮಾರನ ಬಳಿ ಹೊರಡುತ್ತಾನೆ. ರಾಜನನ್ನು ನೋಡಿ ಶ್ರವಣ ಕುಮಾರ ತನ್ನ ವ್ರತ್ತಾಂತವನ್ನು ಹೇಳಿ, ತನ್ನ ತಂದೆ-ತಾಯಿಯರಿಗೆ ಕುಡಿಯಲು ನೀರು ಕೊಟ್ಟು ಕಳಿಸುತ್ತಾನೆ. ದಶರಥ ನೀರು ತೆಗೆದುಕೊಂಡು ಹೋಗಿ ನೀರು ಕೊಟ್ಟು ನಡೆದಿರುವ ಸಂಗತಿಯನ್ನು ತಿಳಿಸಿ ಅವನ ತಂದೆ ತಾಯಿಯರಿಗೆ, ಅವರನ್ನು ಶ್ರವಣ ಕುಮಾರನಿದ್ದಲ್ಲಿಗೆ ಕರೆತರುತ್ತಾನೆ. ಅಷ್ಟರಲ್ಲಾಗಲೇ ಶ್ರವಣ ಕುಮಾರನ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ. ಇದೆಲ್ಲವನ್ನು ನೋಡಿ ಶ್ರವಣ ಕುಮಾರನ ತಂದೆ-ತಾಯಿಯರಿಗೆ ತುಂಬಾ ಧುಖವಾಗಿ, ದಶರಥನಿಗೆ ನಿನಗೂ ಪುತ್ರ ವಿಯೋಗದಿಂದಲೇ ಸಾವು ಬರಲಿ ಎಂದು ಶಪಿಸುತ್ತಾರೆ.

ಇವೆಲ್ಲ ಪುರಾಣ ಕತೆಯನ್ನು ಮತ್ತೆ ಯಾಕೆ ಬರೆಯುತ್ತಿದ್ದಾನೆ ಎಂದುಕೊಳ್ಳಬೇಡಿ. ನಾನು ಇಲ್ಲಿ ಬರೆಯಹೊರಟಿದ್ದು ಆಧುನಿಕ ಶ್ರವಣ ಕುಮಾರರ ಬಗ್ಗೆ. ಆ ಶ್ರವಣ ಕುಮಾರನಿಗೂ ಈ ಶ್ರವಣ ಕುಮಾರರಿಗೂ ಇರುವ ಹೋಲಿಕೆ ನೋಡುವುದಕ್ಕೆ ಒಂದೇ ಆದರೂ ನಡತೆಯಲ್ಲಿ, ನುಡಿಯಲ್ಲಿ, ಆಚಾರ ವಿಚಾರಗಳಲ್ಲಿ ಭಿನ್ನತೆಯನ್ನು ಹೊಂದಿದೆ. ಆದ್ದರಿಂದಲೇ ನಾನು ಇವರನ್ನು ಆಧುನಿಕ ಶ್ರವಣ ಕುಮಾರರು ಎಂದು ಕರೆದಿದ್ದು. ಹಾಗಿದ್ದರೆ ಶ್ರವಣ ಕುಮಾರರು ಯಾಕೆ ಶ್ರವಣ ಕುಮಾರ ಅನ್ನಬಹುದಲ್ಲವೇ ಅಂದುಕೊಳ್ಳಬೇಡಿ. ಅಂದು ಇದ್ದಿದ್ದು ಒಬ್ಬನೇ ಒಬ್ಬ ಶ್ರವಣ ಕುಮಾರ. ಆದರೆ ಇಂದು ಅದೆಷ್ಟೋ ಮಂದಿ ಆ ತರದ ಶ್ರವಣ ಕುಮಾರರಿದ್ದಾರೆ. ಬಹುತೇಕ ಅವರೆಲ್ಲ ಶ್ರವಣ ಕುಮಾರರು ವಾಸಿಸುವುದು ದೊಡ್ಡ ದೊಡ್ಡ ಐ.ಟಿ.ಸಿಟಿಗಳಲ್ಲೇ(ತಾಂತ್ರಿಕ ನಗರ) ಆದುದ್ದರಿಂದ, ಹಳ್ಳಿಯಲ್ಲಿರುವ ಜನರಿಗೆ ಅವರ ದರ್ಶನ ಭಾಗ್ಯ ತುಂಬಾ ಕಡಿಮೆ.

ಬೆಂಗಳೂರಲ್ಲಿ ಬೆಳಿಗ್ಗೆ ಆದರೆ ಸಾಕು ಇವರ ಯಾತ್ರೆ ಪ್ರಾರಂಭ. ಹೆಗಲಿನ ಒಂದು ಬಗ್ಗುಲಿಗೆ ಲ್ಯಾಪಟೊಪ್ ಸಹಿತವಿರುವ ಚೀಲ,ಹೆಗಲ ಇನ್ನೊಂದು ಬದಿಗೆ ಊಟದ ಡಬ್ಬ ಹಾಗೂ ಇತರೆ ಸಾಮಾನುಗಳಿರುವ ಇನ್ನೊಂದು ಚಿಕ್ಕ ಚೀಲ ದರಿಸಿ ಕಛೇರಿಗೆ ಹೊರಡುವ ಸೊಪ್ಟವೇರ್ ಇಂಜನಿಯರಗಳನ್ನು ದೂರದಿಂದ ನೋಡಿದಾಗ ನೆನಪಾಗುವುದು, ತಂದೆ-ತಯಿಯರನ್ನು ಹೊತ್ತು ತಿರ್ಥಯಾತ್ರೆಗೆ ಸಾಗುತ್ತಿರುವ ಶ್ರವಣ ಕುಮಾರನ ನೆನೆಪು. ಹುಡುಗಿಯರಾಗಿದ್ದರಂತೂ ಇನ್ನೂ ಥೇಟ್ ಶ್ರವಣ ಕುಮಾರಿಯರೇ. ಒಂದು ಹೆಗಲಿಗೆ ಲ್ಯಾಪಟೊಪ್ ಚೀಲ, ಇನ್ನೊಂದು ಹೆಗಲಿಗೆ ಶ್ರಂಗಾರ ಸಾಮಗ್ರಿಗಳ ಚೀಲ.

ಇನ್ನೂ ಶಾಲೆಗೆ ಹೋಗುವ ಮಕ್ಕಳೇನು ಕಮ್ಮಿ ಇಲ್ಲ ಬಿಡಿ. ಒಂದು ತೋಳಲ್ಲಿ ಊಟದ ಬುತ್ತಿ ಆದರೆ, ಇನ್ನೊಂದು ತೋಳಲ್ಲಿ ನೀರಿನ ಚೀಲ, ಅಷ್ಟೇ ಸಾಲದು ಎಂಬಂತೆ ಬೆನ್ನಿನ ಮೇಲೆ ಪಠ್ಯ ಪುಸ್ತಕಗಳ ಚೀಲ. ಇವು ಕೇವಲ ಉದಾಹರಣೆಗಳಷ್ಟೇ. ಇಂತಹ ಅದೆಷ್ಟೋ ಪ್ರಸಂಗಗಳಲ್ಲಿ ನೀವು ಶ್ರವಣ ಕುಮಾರರಂತವರನ್ನು ನೋಡಬಹುದು.

ಅಂದಿನ ಶ್ರವಣ ಕುಮಾರ ಕೇವಲ ಪಿತ್ರ ಭಕ್ತಿಗೆ ಹೆಸರಾದರೆ, ಇಂದಿನ ಶ್ರವಣ ಕುಮಾರರು ಪಿತ್ರ ಭಕ್ತಿಯನ್ನು ಬಿಟ್ಟು ವ್ರತ್ತಿ ಬದುಕಿಗೆ ಮಾರು ಹೋದವರು. ಇಂದು ಪಿತ್ರಭಕ್ತಿ ಏನಿದ್ದರು ಅಪ್ಪ-ಅಮ್ಮಂದಿರು ದುಡಿದು ಮಕ್ಕಳನ್ನು ಸಾಕುವವರಿಗೆ ಮಾತ್ರ. ಒಮ್ಮೆ ಮಗ/ಮಗಳು ದುಡಿಯಲು ಪ್ರಾರಂಭವಾದರೆ ಅವರಿಗೆ ಪಿತ್ರಭಕ್ತಿ ಹೊರಟು, ವ್ರತ್ತಿ ಭಕ್ತಿ, ಧನ ಭಕ್ತಿ ಸುರುವಾಗುತ್ತದೆ. ಅದು ಮೋಹನ/ಮೋಹಿನಿಯ ಭಕ್ತಿ ಮೂಡಿದರಂತೂ ಅಪ್ಪ-ಅಮ್ಮಂದಿರನ್ನು ಸಂಪೂರ್ಣ ಮರತೇ ಬಿಡುತ್ತಾರೆ. ಹಿಗಾಗಿಯೇ ಅಲ್ಲವೇ ಪಟ್ಟಣಗಳಲ್ಲಿ ವ್ರದ್ದಾಶ್ರಮಗಳ ಸಂಖ್ಯೆ ಜಾಸ್ತಿ ಆಗ್ತಾ ಇರೋದು.

ವ್ರತ್ತಿ ಭಕ್ತಿಗೆ ಮಾರು ಹೋಗಿ, ಇಂದು ಹೆಂಡತಿ ಮಕ್ಕಳನ್ನೇ ಮರೆಯುತ್ತಾ ಇದ್ದೇವೆ. ಕೆಲಸ-ಕೆಲಸ-ಕೆಲಸ, ಹೆಂಡತಿ ಮಕ್ಕಳಿಗೆ ಸಮಯ ನೀಡಲಾಗದಷ್ಟು ಕೆಲಸ. ಇನ್ನೂ ಗಂಡ-ಹೆಂಡತಿ ಇಬ್ಬರು ದುಡಿಯುವರಾಗಿದ್ದರಂತೂ ಮಕ್ಕಳ ಗತಿ ಅಧೋಗತಿ. ಮಕ್ಕಳು ಕೆಲಸದವರ ಜೊತೆಯಲ್ಲೋ, ಡೇ ಕೇರಗಳಲ್ಲೋ ಬೆಳೆಯಬೇಕಾದ ಪರಿಸ್ಥಿತಿ. ಹೀಗೆ ಬೆಳೆದ ಮಕ್ಕಳು ಮುಂದೆ ತಂದೆ-ತಾಯಿಯರನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ ಅನ್ನುವುದಕ್ಕೆ ಏನು ಗ್ಯಾರಂಟಿ. ಈಗೇನೇ ಹೀಗೆ, ಮುಂದೆ ಇನ್ನೇನಾಗಲಿದೆಯೋ.

                 "ಪುತ್ರ ಭಕ್ತಿಯೇ ಇಲ್ಲದ ಮೇಲೆ ಇನ್ನೆಲ್ಲಿಯ ಪಿತ್ರಭಕ್ತಿ".

-ಮಂಜು ಹಿಚ್ಕಡ್

No comments:

Post a Comment