Saturday, April 19, 2014

ದುರ್ಗಾಸ್ತಮಾನ.

ಅದೆಷ್ಟೋ ವರ್ಷಗಳಿಂದ ಓದಬೇಕು, ಓದಬೇಕು ಎಂದಿಟ್ಟುಕೊಂಡ "ದುರ್ಗಾಸ್ತಮಾನ" ಕಾದಂಬರಿಯನ್ನು ಇದೀಗ ತಾನೆ ಓದಿ ಮುಗಿಸಿದೆ. ಮದಕರಿನಾಯಕ ಮತು ಚಿತ್ರದುರ್ಗದ ಪತನದ ವಸ್ತುವೇ ತ.ರಾ.ಸು ಅವರ ದುರ್ಗಾಸ್ತಮಾನ ಕಾದಂಬರಿ. ಕಾದಂಬರಿ ಕೇವಲ ಮದಕರಿನಾಯಕ ಮತ್ತು ಚಿತ್ರದುರ್ಗಗಳಿಗಷ್ಟೇ ಸೀಮಿತವಾಗಿರದೇ, ಮೈಸೂರಿನಿಂದ ಪೂನಾದವರೆಗಿನ ಅಂದಿನ ಜನಜೀವನ, ಸಾಮಾಜಿಕ ಸ್ಥಿತಿಗತಿಗಳು, ಅಂದಿನ ರಾಜಕಾರಣಗಳ ತಂತ್ರಗಳು, ರಾಜಕೀಯ ಮಸಲತ್ತುಗಳು, ರಣ ತಂತ್ರಗಳು, ಆಂತರೀಕ ಕಲಹಗಳು ಹೀಗೆ ಒಂದಲ್ಲ ಎರಡಲ್ಲ ನೂರಾರು ವಸ್ತುಗಳನ್ನು ಒಳಗೊಂಡಿವೆ. ಕಾದಂಬರಿ ಓದುತ್ತಾ ಕುಳಿತರೆ ಇದು ಹಿಂದೆ ನಡೆದದ್ದಲ್ಲ ನಮ್ಮ ಮುಂದೆ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ಕಾದಂಬರಿಯನ್ನು ಸೃಷ್ಟಿಸಿದ್ದಾರೆ ತ.ರಾ.ಸು ಅವರು. ನೀವು ಇದುವರೆಗೆ ಈ ಕಾದಂಬರಿಯನ್ನು ಒದಿಲ್ಲವಾದಲ್ಲಿ ಒಮ್ಮೆ ಓದಿ.



--ಮಂಜು ಹಿಚ್ಕಡ್ 

No comments:

Post a Comment